Monday, September 27, 2010

ಹಕ್ಕಿ ಗೂಡಿನ ಹುಡುಕಾಟ




ಮುಂಚೆ ಎಲ್ಲ ಭಾನುವಾರ ಬಂದ್ರೆ ಸಾಕು ಅಂತ ಕಾಯುತ್ತಿದ್ದ ದಿನಗಳಿದ್ದವು...ಯಾಕಂದ್ರೆ ಊಟ ಕಟ್ಟಿಕೊಂಡು ಹೊಲಕ್ಕೆ ಹೋಗಿ ಕೆರೆಯ ದಡ ದಲ್ಲಿ ಗುಬ್ಬಿ ಗೂಡು (ಗೀಜಗನ ಗೂಡು)ನೋಡುತ್ತಾ ಖುಷಿ ಪಡುತ್ತಿದ್ದ ದಿನಗಳವು......ಕಲಿತವರಿಗೆ ಬುಧ್ದಿ ಮಂದ ಅಂತ ಅಜ್ಜಿ ಹೇಳೋವಂತೆ...ದಿನ ಕಳೆದಂತೆ ಈ ಆಸಕ್ತಿ ಗಳು ಎಲ್ಲೋ ಕಳೆದು ಹೋದವು....
ಯಾಕೋ ಈ ಭಾನುವಾರ ಇದನ್ನ ಮತ್ತೆ ಅನುಭವಿಸಬೇಕು ಅನ್ನೋ ಆಸೆ.....ಸರಿ ನಾನು ಮತ್ತು ತಮ್ಮ ತೋಟದಲ್ಲಿ ಇರುವ ಪುಟ್ಟ ಹೊಂಡಕ್ಕೆ ಬಾಗಿ ಕೊಂಡಿರೋ ಖದಿರ ವೃಕ್ಷ ಕ್ಕೆ ಯಾವಾಗಲು ಕಟ್ಟೋ ಆ ಗುಬ್ಬಿ ಗೂಡನ್ನ ನೋಡೋಕೆ ಹೊರಟೆವು .....ಕೈಲಿ ಕ್ಯಾಮೆರಾ
ಹೋಗೋ ಹಾದಿಯಲ್ಲೇ ಅಪರೂಪದ ಅಥಿತಿಗಳ ಭೇಟಿ ...ಮಳೆಗಾಲದ ಅಣಬೆ...ಜೋಡಿ ಗುಮ್ಮಕ್ಕಿ , ಕೆರೆ ಹಾವು, ಬಣ್ಣದ ಜೇಡ ......ಕೊನೆಯಲ್ಲಿ ಗೀಜಗನ ಗೂಡು...
ಖಧಿರ ದ ಮರದಲ್ಲಿ ಗೂಡುಗಳೇ ಇಲ್ಲ....ಛೇ! ಬಂದಿದ್ದೆ ವ್ಯರ್ಥ ಅನ್ಕೊಳ್ತಿದ್ದಂತೆ ತಮ್ಮ ಕೂಗಿದ..".ನೋಡಲ್ಲಿ ಮೇಲೆ...!!!"
ನಮ್ಮ ತಾರಸಿ ಮನೆ ನೋಡಿ ನೋಡಿ ಅವಕ್ಕೂ ಆಸೆ ಆಯಿತು ಅನಿಸುತ್ತೆ...ಬಾನೆತ್ತರದ ಅಡಿಕೆ ಮರದ ತುದಿಗೆ ಇಳಿಬಿದ್ದ ಗೂಡುಗಳು ......ಅಂತೂ ಸಿಕ್ಕೆ ಬಿಡ್ತು ......ನೋಡಿ ಕಣ್ಣ ತಂಪು ಮಾಡ್ಕೊಂಡ್ ವಾಪಾಸ್ ಬರೋವಾಗ ಜೋರ್ ಮಳೆ...ಕೆಸರಲ್ಲಿ ಚಪ್ಪಲಿ ಹೂತು ಹೋಗಿ ಬರಿಗಾಲಲ್ಲೇ ಮನೆ ಸೇರಿದೆವು...
ಹೀಗಿತ್ತು ಈ ಬಾರಿಯ ಅಕ್ಕ ತಮ್ಮನ ದಿವ್ಯ ಭಾನುವಾರ...

Thursday, September 23, 2010



ನವರಾತ್ರಿಗೆ ಗುಜರಾತಿ ,ಬಂಗಾಳಿಗಳು ಎದುರು ನೋಡುವಂತೆ ಸಾರಸ್ವತರು ಎದುರು ನೋಡೋದು ಶ್ರಾವಣದ ಚೂಡಿ ಎಂಬ ಪೂಜೆಯನ್ನ....ಶ್ರಾವಣದ ಪ್ರತಿ ಶುಕ್ರವಾರ ಮತ್ತು ಭಾನುವಾರಗಳಂದು ಈ ಪೂಜೆ ತುಳಸಿಯಾ ಮುಂದೆ ವಿಶಿಷ್ಟ್ ರೀತಿಯಲ್ಲಿ ಆಚರಿಸಲಾಗುತ್ತದೆ ....


ಬರಿಪೂಜೆ ಅಂದ್ರೆ ಅದರಲ್ಲೇನು ವಿಶೇಷ ಅಂದ್ರಾ????ಆ ಪೂಜೆಯಲ್ಲಿ ಬಳಸುವ ವಸ್ತುಗಳು ವಿಶೇಷ.....ಶ್ರಾವಣದ ಲ್ಲಿ ಭೂಮಾತೆ ಹಸುರುಟ್ಟು ನಗುವಾಗ ...avallalli ದೊರೆಯುವ ಪುಟ್ಟ ಪುಟ್ಟ ಸಸ್ಯ ಗಳನ್ನ ಅಪರೂಪದ ಪುಟ್ಟ ಹೂಗಳನ್ನ ತಂದು ಕೂಡಿಸಿ ಗುಚ್ಛ ಕಟ್ಟಿ ಅವನ್ನು ವೀಳ್ಯದೆಲೆ ಯೊಂದಿಗೆ ತುಳಸಿ ಮುಂದೆ ಇಟ್ಟು ವಿಧಿವತ್ತಾಗಿ ಪೂಜಿಸುತ್ತಾರೆ ....ಸೌಭಾಗ್ಯ ವೃದ್ಹಿಸುವಂತೆ ಪ್ರಾರ್ಥಿಸುತ್ತಾರೆ ...ಭತ್ತದ ಅರಳು ಮತ್ತು ಬೆಲ್ಲವನ್ನ ನೇವೇದ್ಯ ಮಾಡಿ....ಅರಿಶಿನ ಕುಂಕುಮ ದೊಂದಿಗೆ ಚೂಡಿ ಯನ್ನ ಪರಸ್ಪರ kotkoltare




ಶ್ರಾವಣದಲ್ಲಿ ಹೂವುಗಳೆಲ್ಲ ತವರಿಗೆ ಹೋಗುತ್ತವೆ ಅನ್ನೋದು ನಮ್ಮಕಡೆ ನಂಬಿಕೆ.. ಆದರೂ.ಸುರಿಯುತ್ತಿರುವ ಮಳೆಯಲ್ಲಿ ಪ್ರಕೃತಿಗೆ ಮುತ್ತಿನ ತೋರಣ ಎಂಬಂತೆ ಕೆಲ ಸಸ್ಯ ಗಳು ಸೌಂದರ್ಯ ತೊನೆಯುತ್ತವೆ ಅಂಥಹ ಹಲವು ಸಸ್ಯಗಳನ್ನ ಮಲೆನಾಡಿನದ್ಯಂತಾ ನಾವು ಕಾಣಬಹುದು...ಆ ಸಮಯದಲ್ಲಿ ಬರುವ ಹಲವು ಪೂಜೆಗಳಿಗೆ ಈ ಮುತ್ತಿನ ತೆನೆಯಂತ ಸಸ್ಯ ಗಳನ್ನ ಬಳಸುತ್ತಾರೆ ಕೊಂಕಣಿಗರ ವಿಶೇಷ ಆಚರಣೆ ಚೂಡಿ ಯಲ್ಲಂತೂ ಗೌರಿಮುತ್ತು ಎಂಬ ಸಸ್ಯ ತೋರಣ ಇರಲೇಬೇಕು.......ಒಟ್ಟಿನಲ್ಲಿ ಈ ಸಸ್ಯ ಗಳು ಪ್ರಕೃತಿ ಯನ್ನು ನಿತ್ಯ ಮುತ್ತೈದೆ ಯಾಗಿಸಿವೆ ...


Wednesday, September 22, 2010

ಅಮಿತರುಚಿ .....ಎರಡಿಂಚು ನಾಲಿಗೆಗೆ


ಮಳೆಗಾಲ ಶುರು ಆದ ಕೂಡಲೇನೆಟ್ಟ ಹೀರೆ ಬಳ್ಳಿ ತುಂಬಈಗ ಕಾಯಿ ತುಂಬಿ ಕೊಂಡಿವೆ ......ಬರೀ ಸಾರು ಬಜ್ಜಿ ಪಲ್ಯ ತಿಂದು ಬೇಜಾರೈತು ಅಂತ ಹೊಸ ರುಚಿ ತಯಾರಿಸೋ ಉಮೇದು ಬಂದು ee ಕೋಸಂಬರಿ ತಯಾರಿಸಿದೆ...ನೀವು ಮನೇಲಿ ಒಮ್ಮೆ ಪ್ರಯೋಗಿಸಿ ಖಂಡಿತ ಇಷ್ಟ ಆಗುತ್ತೆ ಅನ್ನೋದು ನನ್ನ ನಂಬಿಕೆ....ಆದ್ರೆ ಇದಕ್ಕೆ ಹೀರೆಕಾಯಿ ಸಿಪ್ಪೆ ಬಳಸಿದೀನಿ ...ಮೊಸರನ್ನ ಮತ್ತು ಹೀರೆಕಾಯಿ ಸಿಪ್ಪೆ ಕೋಸಂಬರಿ ಒಳ್ಳೆ ಫ್ರೆಂಡ್ಸ್ ....
ಏನೇನು ಬೇಕು ???.
: ಹೀರೆಕಾಯಿ ಗೀರು(ಸಿಪ್ಪೆ),೩ ಈರುಳ್ಳಿ ,ಸ್ವಲ್ಪ ಹಸಿ ಕೊಬ್ಬರಿ ,ಹುಣಸೆ ರಸ ,ಮೆಣಸಿನ ಪುಡಿ,ಉಪ್ಪು,ಸ್ವಲ್ಪ ಎಣ್ಣೆ
ಮಾಡುವ ವಿಧಾನ:
ಹೀರೆಕಾಯಿ ಸಿಪ್ಪೆಯನ್ನ ಚಿಕ್ಕದಾಗಿ ಕತ್ತರಿಸಿ ಇಟ್ಕೊಳ್ಳಿ.ಈರುಳ್ಳಿ ಯನ್ನು ಸಣ್ಣಗೆ ಹೆಚ್ಚಿ.ಸ್ವಲ್ಪ ಎಣ್ಣೆ ಹಾಕಿ ಹೀರೆಕಾಯಿ ಸಿಪ್ಪೆಯನ್ನು ಪರಿಮಳ ಬರೋತನ್ಕ ಹುರಿಬೇಕು .ನಂತರ ಈರುಳ್ಳಿ ಕೆಂಪಗೆ ಹುರೀಬೇಕು.. ಹಸಿ ಕೊಬ್ಬರಿ ತುರಿ ಸೇರಿಸಿ ಮತ್ತೆ ಕೈಯಾಡಿಸಿ ಮೆಣಸಿನ ಪುಡಿ ಹುಣಸೆರಸ ಉಪ್ಪು ಸೇರಿಸಿ ಘಮ ಬರುವ ತನಕ ಕೈಯಾಡಿಸಿ ಕೊನೆಯಲ್ಲಿ ಹುರಿದ ಹೀರೆಕಾಯಿ ಸಿಪ್ಪೆ ಸೇರಿಸಿ...
ಇಲ್ಲೇ ಓದಿ ಕಾಯಿ ತೋಳ್ಕೊಬಾರದು.ಮೆಲೋಗರವನ್ನ ತಿಂದು ರುಚಿ ನೋಡಿ ನನಗೆ ಹೇಳಿ ಹೆಂಗಿದೆ ಅಂತ???

Friday, June 5, 2009

ಸುಮ್ನೆ ಒಂದ್ ಕತೆ.....

ಸುಮ್ಮನೆ ಒಂದ್ ಕತೆ......
ನಿನ್ನೆ ಶಾಲಿನಿ ಮೇಡಂ ಪಾಠ ದ ಮಧ್ಯ ಒಂದ್ ಜನಪದ ಕತೆ ಹೇಳಿದ್ರು....ಯಾಕೋ ಮನಸಿಗೆ ತುಂಬ ಹತ್ತಿರ ,,,,ನನದೆ ಏನೋ ಅಂತ ಅನ್ನಿ ಸಿ ಬಿಡ್ತು....ಅದಕ್ಕೆ ನಿಮಗೆ ಹೇಳೋಣ ಅಂತ.....

ಒಬ್ಬಾಕೆ ಹುಡುಗಿ...ಆಕೆಗೆ ಕತೆ ಹೇಳೋದು ..ಹಾಡು ಹೇಳೋದು ಅಂದ್ರೆ ತುಂಬ ಇಷ್ಟ...ಇಷ್ಟ ಅನ್ನೋದಕ್ಕಿಂತ ...ಅದು ಅವಳ ಆತ್ಮ ,ಜೀವ ಅಂತಾನೆ ಹೇಳಬ್ಬಹುದು.....ಯಾವ ಗಳಿಗೆ ಯಲ್ಲಿ ಬೇಕಾದರು ಆಕೆ ಹಾಡಾಗ ಬಲ್ಲಳು ...ಕತೆಯಾಗಿ ಸೃಜಿಸ ಬಲ್ಲಳು...ಕನಸಿನ ಲೋಕದಲ್ಲಿದ್ದ ಹುಡುಗಿಗೆ ಮಾಡುವೆ ಆಗುತ್ತೆ.....ಆಗಲೂ ಆಕೆಗೆ ...ಕನಸೇ,,,,,,,ಆದರೆ...????
ಗಂಡನ ಮನೆಯ ವಾತಾವರಣ ಬೇರೆಯದೇ ...ಅಲ್ಲಿ ಭಯವಿತ್ತು ...ದನಿಬಿತ್ತು ಹಾಡುವಂತಿಲ್ಲ...ಆಗೆಲ್ಲ ಆ ಹಾಡು, ಕಥೆ ಗಳು...ಅಕ್ಕ ಅಕ್ಕ ಒಂದ್ ಕತಿ ಹೇಳ ...ಅಕ್ಕ ಅಕ್ಕ ಒಂದ್ ಹಾಡ ಹೇಳ...ಅಂತ ಅವಳನ್ನ ಪಿಡಿಸ್ತಿದ್ವು...ಆಗ ಆಕೆ....ಸುಮ್ಮನಾಗ್ರಿ ...ಇಲ್ಲಿ ಕೆಲಸ ಅದಾವ ಮುಂಚಿನಂಗ್ ನ ನಿಮ್ಮ ಕೂಡ ಸೇರುವ್ಹಂಗ್ ಇಲ್ಲ....ಸುಮ್ಮನ ಕೂಡ್ರಿ ಹೋಗಿ ಅಂತಲೇ.....ದಿನ ಈ ಹುಡುಗಿಯ ನಿರ್ಲಕ್ಹ್ಸ ನೋಡಿ ನೋಡಿ ಬೇಸರ ಆಗಿ....ಒಮ್ಮೆ....ಆ ಹಾಡು..ಚಪ್ಪಲಿ ಆಗಿ...ಕಥಿ...ಹೊರಗಿನ ಗೂಟಕ್ಕ್ ಅಂಗಿ ಆಗಿ...ಕುಳಿತು ಬಿಡುತ್ವೆ.....

ಹೊರಗಿಂದ ಬಂದ ಗಂಡ...ಹೊಸ ಚಪ್ಪಲಿ ಮತ್ತ ಅಂಗಿ ನೋಡಿ...ಯಾರದ್ದು ಅಂತ ಕೇಳ್ತಾನೆ...ಆದ್ರೆ ಎದ್ಯವುದು ಗೊತ್ತಿಲ್ಲದ ಆಕೆ ...ಗೊತ್ತಿಲ್ಲ ಎಂದೆ ಹೇಳುತ್ತಲೇ......ಗಂಡ ಅವಳ ಮೇಲೆ ಸಂಶಯ ಪಡ್ತಾನೆ.....
ಮತ್ತು ಉರ್ರ ಹೊರಗಿನ ಗುಡಿಯ ಕಟ್ಟೆಯ ಮೇಲೆ ಮಲಗುತ್ತಾನೆ .....

ರಾತ್ರಿ ಆಗುತ್ತ ಲೇ.....ಎಲ್ಲ ಮನೆಯ ದೀಪಗಳು..ಆ ದಿನದ ವಿಷಯ ಮಾತಾಡಲು....ಗುಡಿಯಲ್ಲಿ ಸೇರುತ್ತವೆ...ಅವಳ ಮನೆಯ ದೀಪ..ಉ ಅಲ್ಲಿ ಇರುತ್ತೆ...ಆಗ ಎಲ್ಲರಂತೆ ತನ್ನ ಮೆಯ ಹುಡುಗಿಯ ಕತೆ ಹೇಳುತ್ತದೆ....

ಆಗ್ ಗಂಡನಿಗೆ ತನ್ನ ತಪ್ಪಿನ ಅರಿವಾಗಿ...ಆಕೆಯ ಬೇರೆ ಯಾವ ಅಭಿವ್ಯಕ್ತಿ ನೋಡದೆ ಬರಿ...ಕೆಲಸ..ತನ್ನ ಮೆಯ ಸುಖಾಕ್ಕೆಂದೇ ಮಿಸಳಗಿಸಿದೆ ಅನಿಸುತ್ತೆ...

ಮುಂಜ್ಜನೆ ಎದ್ದು ಅಕ್ಕೆ ಹತ್ತಿರ ಹೊಗ್ಗಿ...ಏನ ಒಂದ್ ಹದ ಹೇಳ...ಅಂತಾನೆ...ಗಂಡ ತನ್ನ ಹಾಡು ಕೇಳ್ತಾನೆ anno khushiyalli..ಆಕೆ ಹಾಡಲು ಹೋಗ್ತಾಳೆ...ಆದ್ರೆ ಒಂದು ಹಾಡು ಆಕೆಗೆ ಬರೋದೇ ಇಲ್ಲ...ಇಲ್ಲ ಹಾಡು ಬರಲ್ಲ...ಅಂದಾಗ..ಸರಿ ಒಂದ್ ಕಟಿ ನದರು ಹೇಳು ಅಂತಾನೆ....ಎದೆಬಗೆದು ನೋಡಿದರು..ಒಂದ್ ಕತೆನೂ ಅಲ್ಲಿ ಇರಲ್ಲ....ಹೀಗೇಕೆ ಆಯಿತು???????