


ಮುಂಚೆ ಎಲ್ಲ ಭಾನುವಾರ ಬಂದ್ರೆ ಸಾಕು ಅಂತ ಕಾಯುತ್ತಿದ್ದ ದಿನಗಳಿದ್ದವು...ಯಾಕಂದ್ರೆ ಊಟ ಕಟ್ಟಿಕೊಂಡು ಹೊಲಕ್ಕೆ ಹೋಗಿ ಕೆರೆಯ ದಡ ದಲ್ಲಿ ಗುಬ್ಬಿ ಗೂಡು (ಗೀಜಗನ ಗೂಡು)ನೋಡುತ್ತಾ ಖುಷಿ ಪಡುತ್ತಿದ್ದ ದಿನಗಳವು......ಕಲಿತವರಿಗೆ ಬುಧ್ದಿ ಮಂದ ಅಂತ ಅಜ್ಜಿ ಹೇಳೋವಂತೆ...ದಿನ ಕಳೆದಂತೆ ಈ ಆಸಕ್ತಿ ಗಳು ಎಲ್ಲೋ ಕಳೆದು ಹೋದವು....
ಯಾಕೋ ಈ ಭಾನುವಾರ ಇದನ್ನ ಮತ್ತೆ ಅನುಭವಿಸಬೇಕು ಅನ್ನೋ ಆಸೆ.....ಸರಿ ನಾನು ಮತ್ತು ತಮ್ಮ ತೋಟದಲ್ಲಿ ಇರುವ ಪುಟ್ಟ ಹೊಂಡಕ್ಕೆ ಬಾಗಿ ಕೊಂಡಿರೋ ಖದಿರ ವೃಕ್ಷ ಕ್ಕೆ ಯಾವಾಗಲು ಕಟ್ಟೋ ಆ ಗುಬ್ಬಿ ಗೂಡನ್ನ ನೋಡೋಕೆ ಹೊರಟೆವು .....ಕೈಲಿ ಕ್ಯಾಮೆರಾ
ಹೋಗೋ ಹಾದಿಯಲ್ಲೇ ಅಪರೂಪದ ಅಥಿತಿಗಳ ಭೇಟಿ ...ಮಳೆಗಾಲದ ಅಣಬೆ...ಜೋಡಿ ಗುಮ್ಮಕ್ಕಿ , ಕೆರೆ ಹಾವು, ಬಣ್ಣದ ಜೇಡ ......ಕೊನೆಯಲ್ಲಿ ಗೀಜಗನ ಗೂಡು...
ಖಧಿರ ದ ಮರದಲ್ಲಿ ಗೂಡುಗಳೇ ಇಲ್ಲ....ಛೇ! ಬಂದಿದ್ದೆ ವ್ಯರ್ಥ ಅನ್ಕೊಳ್ತಿದ್ದಂತೆ ತಮ್ಮ ಕೂಗಿದ..".ನೋಡಲ್ಲಿ ಮೇಲೆ...!!!"
ನಮ್ಮ ತಾರಸಿ ಮನೆ ನೋಡಿ ನೋಡಿ ಅವಕ್ಕೂ ಆಸೆ ಆಯಿತು ಅನಿಸುತ್ತೆ...ಬಾನೆತ್ತರದ ಅಡಿಕೆ ಮರದ ತುದಿಗೆ ಇಳಿಬಿದ್ದ ಗೂಡುಗಳು ......ಅಂತೂ ಸಿಕ್ಕೆ ಬಿಡ್ತು ......ನೋಡಿ ಕಣ್ಣ ತಂಪು ಮಾಡ್ಕೊಂಡ್ ವಾಪಾಸ್ ಬರೋವಾಗ ಜೋರ್ ಮಳೆ...ಕೆಸರಲ್ಲಿ ಚಪ್ಪಲಿ ಹೂತು ಹೋಗಿ ಬರಿಗಾಲಲ್ಲೇ ಮನೆ ಸೇರಿದೆವು...
ಹೀಗಿತ್ತು ಈ ಬಾರಿಯ ಅಕ್ಕ ತಮ್ಮನ ದಿವ್ಯ ಭಾನುವಾರ...
ba amiti matte ade lokakke hogona
ReplyDelete